Tuesday 25 December 2012

ಸರ್ಕಾರವೇ ಮುಂದೆ ನಿಂತು ರೇಪಿಸ್ಟ್‍ಗಳ ನರ ಕತ್ತರಿಸಲಿ!






ನಿಮಗೆಲ್ಲಾ ಅರುಣಾ ಶಾನುಭೋಗ್ ಪ್ರಕರಣ ನೆನಪಿರಬಹುದು. ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಜ್ಯೂನಿಯರ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅರುಣಾರನ್ನು 27 ನವೆಂಬರ್ 1973 ರಂದು ಅದೇ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸೋಹನ್‍ಲಾಲ್ ವಾಲ್ಮೀಕಿ ಎಂಬ ವ್ಯಕ್ತಿ ಅತ್ಯಂತ ಭೀಕರವಾಗಿ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿದ್ದ. ಆಸ್ಪತ್ರೆಯ ಬೇಸ್‍ಮೆಂಟ್‍ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದ ಅರುಣಾರ ಮೇಲೆ ಹಿಂದಿನಿಂದ ಎರಗಿದ ಸೋಹನ್‍ಲಾಲ್ ನಾಯಿ ಕಟ್ಟುವ ಚೈನಿನಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಮೃಗೀಯವಾಗಿ ಹಿಂದಿನಿಂದ ಪ್ರವೇಶಿಸಿ(anal rape) ಅತ್ಯಾಚಾರ ನಡೆಸಿದ್ದ. ಕುತ್ತಿಗೆಯನ್ನು ಬಲವಾಗಿ ಬಿಗಿದದ್ದರಿಂದ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿತಗೊಂಡು ಆಕೆ ಅವತ್ತಿನಿಂದ ಇವತ್ತಿನವರೆಗೂ ಜೀವಂತ ಶವವಾಗಿ ಬದುಕುತ್ತಿದ್ದಾರೆ. ಕಳೆದ 38 ವರ್ಷಗಳಿಂದ ತಾನು ಕೆಲಸ ಮಾಡುತ್ತಿದ್ದ ಎಡ್ವರ್ಡ್ ಆಸ್ಪತ್ರೆಯ ಬೆಡ್ ಒಂದರ ಮೇಲೆ, ಯಾರೊಂದಿಗೂ ಮಾತನಾಡದೇ, ತನ್ನ ಕೆಲಸಗಳನ್ನು ತಾನು ನಿರ್ವಹಿಸಿಕೊಳ್ಳಲಾಗದಂತ ಅಸಹಾಯಕ ಸ್ಥಿತಿಯಲ್ಲಿ ಮಲಗಿದ್ದಾರೆ. ಆದರೆ ಆಕೆಯನ್ನು ಈ ಸ್ಥಿತಿಗೆ ತಳ್ಳಿದ ಸೋಹನ್‍ಲಾಲ್ ಮೇಲೆ ಕೇವಲ ಕಳ್ಳತನ ಮತ್ತು ಕೊಲೆ ಯತ್ನ ಆರೋಪಗಳನ್ನಷ್ಟೇ ಹೊರಿಸಿದ ಪೋಲೀಸರಿಂದಾಗಿ ಆತ ಕೇವಲ ಏಳು ವರ್ಷಗಳ ಸಾದಾ ಸಜೆಯನ್ನು ಮಾತ್ರ ಅನುಭವಿಸಿ ಇವತ್ತು ನಿರಾತಂಕವಾಗಿ ನಮ್ಮ ನಡುವೆಯೇ ಓಡಾಡಿಕೊಂಡಿದ್ದನೆ. ಅರುಣಾರ ಸ್ನೇಹಿತೆ ಮತ್ತು ಪತ್ರಕರ್ತೆ ಪಿಂಕಿ ವಿರಾನಿ ಸಲ್ಲಿಸಿದ್ದ ದಯಾಮರಣದ ಅರ್ಜಿಯನ್ನು ಭಾರತದ ಸುಪ್ರೀಮ್ ಕೋರ್ಟ್ 7 ಮಾರ್ಚ್ 2011 ರಂದು ತಿರಸ್ಕಿರಿಸುವುದರೊಂದಿಗೆ ಆಕೆ ತನ್ನ ಬದುಕಿನ ಉಳಿದ ವರ್ಷಗಳನ್ನೂ ಹೀಗೆಯೇ ಬದುಕಬೇಕಾಗಿದೆ. ಆ ಹೆಣ್ಣುಮಗಳಿಗೆ ಬದುಕನ್ನೂ ಕೊಡದೆ, ಸಾಯಲೂ ಬಿಡದೆ, ನ್ಯಾಯವನ್ನೂ ದೊರಕಿಸಿಕೊಡದೆ ಆಕೆ ಚಿತ್ರಹಿಂಸೆ ಅನುಭವಿಸುವಂತೆ ಮಾಡಿರುವುದಕ್ಕೆ ಯಾರು ಹೊಣೆ?


         ಮೊನ್ನೆ ದೆಹಲಿಯಲ್ಲಿ ಬಸ್ ಒಂದರೊಳಗೆ ನಡೆದ 23ರ  ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆಯನ್ನೇ ತೆಗೆದುಕೊಳ್ಳಿ. ಇವತ್ತು ಆ ಹೆಣ್ಣುಮಗಳು ಅಲ್ಲಿ ಕೋಮಾ ಅವಸ್ಥೆಯಲ್ಲಿ ಮಲಗಿರುವುದಕ್ಕೆ ಯಾರು ಕಾರಣ ಅಂತಾ ಯೋಚಿಸಿ ನೋಡಿ. ಪಾರ್ಲಿಮೆಂಟ್‍ನಲ್ಲಿ, ಅಸೆಂಬ್ಲಿಗಳಲ್ಲಿ ನಮ್ಮನ್ನು represent ಮಾಡುವ ನಾಯಕರು, ಅವರನ್ನು ಆರಿಸಿ ಕಳಿಸಿರುವ ಮತದಾರರು, ದೆಹಲಿಯ ಬೇಜವಾಬ್ದಾರಿ ಮತ್ತು ಭ್ರಷ್ಟ ಪೋಲಿಸ್ ವ್ಯವಸ್ಥೆ, morality ಹೇಳಿಕೊಡದ ನಮ್ಮ ಶಿಕ್ಶಣ ವ್ಯವಸ್ಥೆ, ಎಲ್ಲವನ್ನೂ ಮನೋರಂಜನೆಯ ಮತ್ತು unhealthy competitionನ ಭಾಗವಾಗಿ ನೋಡುವ ಮೀಡಿಯಾಗಳು,
ಸುತ್ತಲೂ ಬೆಂಕಿ ಉರಿಯುತ್ತಿದ್ದರೂ ಎಲ್ಲವನ್ನೂ tolerate ಮಾಡುತ್ತ ನಿರ್ವಿಕಾರವಾಗಿ, ನಿರ್ಲಿಪ್ತವಾಗಿ ಕುಳಿತಿರುವ ನಾವು ಎಲ್ಲರೂ ಈ ಘಟನೆಯಲ್ಲಿ ಒಂದಲ್ಲ ಒಂದು ಅರ್ಥದಲ್ಲಿ ತಪ್ಪಿತಸ್ಥರೇ. ಇವತ್ತು ಭಾರತದ ಕಾನೂನಿನಲ್ಲಿ ಅತ್ಯಾಚಾರದಂತ ಗಂಭೀರ ಅಪರಾಧಕ್ಕೆ ಕೇವಲ ಏಳು ವರ್ಷಗಳ ಶಿಕ್ಷೆಯಷ್ಟೇ ಇದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು(sexual abuse) ಮತ್ತು ಅತ್ಯಾಚಾರದ ಘಟನೆಗಳು ಎಷ್ಟೊಂದು frequent ಆಗಿ ನಡೆಯುತ್ತಿದೆಯೆಂದರೆ, ಇಷ್ಟರಲ್ಲಾಗಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಮಸೂದೆಯೊಂದು ಪಾರ್ಲಿಮೆಂಟ್‍ನಲ್ಲಿ ಪಾಸಾಗಿರಬೇಕಿತ್ತು. ಆದರೆ ಈ ದೇಶದ ದುರಂತ ನೋಡಿ, ಇವತ್ತು ಲೋಕಸಭೆಯಲ್ಲೇ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಇಬ್ಬರು ಸಂಸದರಿದ್ದಾರೆ. ಈ ದೇಶದ ಒಟ್ಟು 369 ಎಂಎಲ್‍ಎಗಳು ಮತ್ತು ಎಂಪಿಗಳ ಮೇಲೆ, ಮಹಿಳೆಯರ ಮೇಲಿನ sexual abuse ಆರೋಪಗಳಿವೆ. ಇನ್ನು ರಾಜ್ಯ ಸರ್ಕಾರದಿಂದಂತೂ ಯವುದೇ ನಿರೀಕ್ಷೆಗಳನ್ನು ಇಡುವುದೇ ತಪ್ಪು. ಇಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಚಿಂತಿಸಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೇ ಅಸೆಂಬ್ಲಿಯಲ್ಲಿ ಕುಳಿತು ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾರೆ. ಗೆಳೆಯನ ಹೆಂಡತಿಯನ್ನು ಅತ್ಯಾಚಾರ ಮಾಡುವವರೂ ಕೂಡಾ ಇಲ್ಲಿ ಮಂತ್ರಿಗಳಾಗುತ್ತಾರೆ. ಮೊದಲು ಸರ್ಕಾರದ ಮಾನಕ್ಕೇ ರಕ್ಷಣೆ ಇಲ್ಲ, ಇನ್ನು ಈ ಸರ್ಕಾರ ಮಹಿಳೆಯರಿಗೆ ಇನ್ನೆಲ್ಲಿಂದ ರಕ್ಷಣೆ ಕೊಡುತ್ತೆ ಬಿಡಿ. 16ರಿಂದ 22 ವರ್ಷದೊಳಗಿನ ಯುವಕರು ಇವತ್ತು sexual abuse ಮತ್ತು rapeನಂಥ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಿಂದೆಲ್ಲಾ ಗಂಡು ಮಕ್ಕಳು ತಮ್ಮ ತಾಯಂದಿರಿಂದ ಶಿವಾಜಿ, ಪೃಥ್ವಿರಾಜ್ ಚೌಹಾಣ್ ಕಥೆಗಳನ್ನು ಕೇಳಿ ಸಹಜವಾಗಿಯೆ ಹೆಣ್ಣಿನ ಬಗ್ಗೆ ಗೌರವ ಬೆಳೆಸಿಕೊಳ್ಳುತ್ತಿದ್ದರು. ಆದರೆ ಇವತ್ತಿನ ಪೋಷಕರು ಅನೈತಿಕ ಸಂಬಂಧಗಳ ಸುತ್ತಲೇ ಸುತ್ತುವ ಮೆಗಾ ಸೀರಿಯಲ್‍ಗಳು ಮತ್ತು ’ಬಿಗ್ ಬಾಸ್‍’ನಂಥ ದರಿದ್ರ ರಿಯಾಲಿಟಿ ಶೋಗಳ ಮುಂದೆ ಮಕ್ಕಳನ್ನೂ ಕೂರಿಸಿ, ತಾವು ಕುಳಿತುಬಿಡುತ್ತಾರೆ. Aggressive ಆಗಿರುವುದೇ attitude ಎಂದುಕೊಂಡ ಒಂದು generation ನಮ್ಮ ಮುಂದೆಯೇ ಬೆಳೆಯುತ್ತಿದೆ.

               ಇನ್ನು social responsibility ಎಂದರೇನೆಂದೇ ಗೊತ್ತಿಲ್ಲದ ನ್ಯೂಸ್ ಚಾನೆಲ್‍ಗಳು ಬಾಲಿವುಡ್‍ನ ಗಾಸಿಪ್‍ಗಳು, ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಅಣ್ಣಾ ಹಜಾರೆ ಉಪವಾಸ, ಅತ್ಯಾಚಾರ, ಮುಂಬೈ ಬಾಂಬ್ ಸ್ಫೋಟ, ಸಲ್ಮಾನ್ ಖಾನ್‍ನ ಹೊಸ ಸಿನಿಮಾ, ಸನ್ನಿ ಲಿಯೋನ್‍ಳ ಹಳೇ ಚಿತ್ರಗಳೂ ಎಲ್ಲವನ್ನೂ ಹದವಾಗಿ ಕಲೆಸಿ, ಮಸಾಲೆ ಬೆರೆಸಿ ಬಿರಿಯಾನಿ ಮಾಡಿ ಬಡಿಸಿಬಿಡುತ್ತವೆ. ನಾವು ಟೀವಿ ಮುಂದೆ ಕುಳಿತು ಬಾಯಿ ಚಪ್ಪರಿಸಿ ಉಂಡು, ಒಂದೆರಡು ಕಮೆಂಟು ಬಿಸಾಕಿ ಸುಮ್ಮನಾಗಿಬಿಡುತ್ತೇವೆ. ಯಾವ ಸುದ್ದಿಗೆ ಎಷ್ಟು weightage ಕೊಡಬೇಕು, ಹಾಗೆ ಕೊಟ್ಟರೆ ಅದು ನೋಡುಗರ ಮೇಲೆ ಎಂತಹ impact ಉಂಟುಮಾಡುತ್ತದೆ ಎಂದು ಚಾನೆಲ್‍ಗಳಿಗೇ ಗೊತ್ತಿಲ್ಲ, ಇನ್ನು ಆ ಚಾನೆಲ್‍ಗಳನ್ನು ನೋಡುವ ನಮಗೆಲ್ಲಿ ಗೊತ್ತಿರುತ್ತದೆ? ಅದಕ್ಕೇ ನಾವು ಬಾಂಬ್ ಸ್ಪೋಟ, ಅತ್ಯಾಚಾರ, ಭ್ರಷ್ಟಾಚಾರದಂತಹ ಗಂಭೀರ issueಗಳನ್ನೂ ಕೂಡಾ, a part of entertainment ಎಂಬಂತೆ ಸಿನಿಕತನ ಮತ್ತು ಉಡಾಫೆಯಿಂದ ನೋಡುತ್ತೇವೆ. We are all getting to be cynics! ದೂರದ ದೆಹಲಿಯಲ್ಲೆಲ್ಲೋ ಆಗುತ್ತಿರುವ ಅತ್ಯಾಚಾರದಂತಹ ಘಟನೆಗಳಿಗೆ, ನಾವಿವತ್ತು react ಮಾಡದಿದ್ದರೆ, ನಾಳೆ ಅಂತಹುದೇ ಘಟನೆಗಳು ನಮ್ಮ ಊರಿನ ಬೀದಿಗಳಲ್ಲೂ ನಡೆಯಬಹುದೆಂಬ ಕಲ್ಪನೆಯೇ ನಮಗಿಲ್ಲದಿರುವುದು ನಿಜಕ್ಕೂ ಅಪಾಯಕಾರಿ.

ಈ ವರ್ಷ ದೆಹಲಿಯೊಂದರಲ್ಲೇ 661 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ವರ್ಷದ 564 ಪ್ರಕರಣಗಳಿಗೆ ಹೋಲಿಸಿದರೆ 17% ಹೆಚ್ಚು. ಕಳೆದ ಹತ್ತು ವರ್ಷಗಳಿಂದ ಪ್ರತೀ ವರ್ಷ 15%ನಿಂದ 20%ನಷ್ಟು ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅವತ್ತೇ ನಾವು ಎಚ್ಚೆತ್ತುಕೊಂಡು ಬೀದಿಗಿಳಿದು ಸರ್ಕಾರಗಳಿಗೆ, ಪೋಲೀಸರಿಗೆ ಬಿಸಿ ಮುಟ್ಟಿಸಿದ್ದರೆ, ಇವತ್ತು ಆ ಹೆಣ್ಣುಮಗಳಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೆನೋ. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲಾಗದ ಸಮಾಜ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಲೇಬೇಕು ಮತ್ತು ಅದೇ ಸಮಾಜದ ಭಾಗವಾಗಿರುವ ನಾವು ಕೂಡಾ ತಪ್ಪಿತಸ್ಥರಾಗುತ್ತೇವೆ ಅಲ್ಲವೇ?
ಮೊನ್ನೆಯ ಪ್ರಕರಣ ನಮ್ಮ ಪೋಲೀಸ್ ವ್ಯವಸ್ಥೆಯ loop holeಗಳನ್ನು ಎತ್ತಿ ತೋರಿಸಿತು. ಇವತ್ತು ದೇಶದಲ್ಲಿಯೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವ ನಗರ ದೆಹಲಿ. ನಮ್ಮ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕವೊಂದರಲ್ಲೇ 4479 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕೇವಲ 315 ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಅಥವಾ ಪ್ರತೀ ನೂರು ಆರೋಪಿಗಳಲ್ಲಿ ಏಳು ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ. ಹೆಚ್ಚಿನೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಬಿಗಿಯಾದ ಪೋಲಿಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಇರುವ ಕರ್ನಾಟಕದ್ದೇ ಈ ಕಥೆಯಾದರೆ ಬೇರೆ ರಾಜ್ಯಗಳ ಕುರಿತು ಯೋಚನೆ ಮಾಡಿ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಪೋಲೀಸರೇ ಅತ್ಯಾಚಾರಕ್ಕೆ ಒಳಗಾದವರು ಮತ್ತು ಆರೋಪಿಗಳ ಮಧ್ಯೆ ರಾಜಿ ಮಾಡಿಸಲು ಪ್ರಯತ್ನಿಸಿ ಪ್ರಕರಣವನ್ನು ಮುಚ್ಚಿಹಾಕುತ್ತಾರೆ. ಆರೋಪಿಗಳಿಂದ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಿ ಅದರ ಒಂದು ಭಾಗವನ್ನು ಅತ್ಯಾಚಾರಕ್ಕೆ ಒಳಗಾದವರ ಕುಟುಂಬಕ್ಕೆ ನೀಡಿ ಬಾಯಿ ಮುಚ್ಚಿಸಲಾಗುತ್ತದೆ. ಅತ್ಯಾಚಾರಕ್ಕೆ ಒಳಗಾದವರನ್ನೇ ಅನುಮಾನದಿಂದ ನೋಡುವ, ಅವಮಾನಿಸುವ ಘಟನೆಗಳೂ ನಡೇಯುತ್ತಿವೆ. ಮಹಿಳೆಯರ ಮೇಲಿನ sexual abuse ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ಕೋರ್ಟ್ ಸ್ಥಾಪಿಸುವ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ FIR ದಾಖಲಿಸದ ಪೋಲಿಸ್ ಅಧಿಕಾರಿಗಳನ್ನು suspend ಮಾಡುವ ಕೆಲಸಗಳೂ ಕೂಡಾ ಸರ್ಕಾರಗಳಿಂದ ಆಗುತ್ತಿಲ್ಲ.

         ನಮ್ಮ ದುರಂತ ನೋಡಿ, ನಾವು ಒಂದು ಕಡೆ ಹೆಣ್ಣನ್ನು ದುರ್ಗೆ, ಸರಸ್ವತಿ, ಶಕ್ತಿ ಎಂದೆಲ್ಲಾ ಹೆಸರಿಟ್ಟು ಪೂಜಿಸುತ್ತೇವೆ. ಇನ್ನೊಂದು ಕಡೆ ಅದೇ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದ್ದರೂ ನೋಡಿ ಸುಮ್ಮನಾಗುತ್ತೇವೆ. ಇಂತಹ hypocracy ನಮ್ಮ ದೇಶದಲ್ಲಿ ಮಾತ್ರ ನೋಡಲು ಸಾಧ್ಯ. ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಸ್ಥಾನಕ್ಕೇರಿಸಿ ಹೆಮ್ಮೆ ಪಡುತ್ತೇವೆ. ಅದೇ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಏಳು ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಿ ಅವರ ಶಿಕ್ಷೆಯನ್ನು ಮರಣದಂಡನೆಯಿಂದ ಜೀವಾವಧಿಗೆ ಇಳಿಸುತ್ತಾರೆ. (ಅದರಲ್ಲಿಯೂ ಒಬ್ಬ ಅಪರಾಧಿ ಏಳು ವರ್ಷದ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವನು. ಆ ಮಗುವಿನ ತಂದೆ ತಾಯಿ ಈ ದೇಶದ ನ್ಯಾಯ ವ್ಯವಸ್ಥೆಯ ಮೇಲೆ, ಸಂವಿಧಾನದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಇದೊಂದು ಪ್ರಕರಣದಲ್ಲಿ ಪ್ರತಿಭಾ ಪಾಟೀಲ್‍ರನ್ನು ಈ ದೇಶ ಯಾವತ್ತೂ ಕ್ಷಮಿಸಲಾರದು) ಒಂದೇ ನೆಮ್ಮದಿಯ ವಿಷಯವೆಂದರೆ ಇವತ್ತು ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಸ್ಥಾನದಲ್ಲಿ ಇಲ್ಲ. ಇದ್ದಿದ್ದರೆ ಈಗಿನ ದೆಹಲಿ ಪ್ರಕರಣದಲ್ಲೂ ರೇಪಿಸ್ಟ್‍ಗಳಿಗೆ ಕ್ಷಮಾದಾನ ನೀಡಿ ತಮ್ಮ ಪತಿಯೊಂದೆ ನಿಕೋಬಾರ್ ದ್ವೀಪಗಳಿಗೆ ಟೂರ್ ಹೊರಟುಬಿಡುತ್ತಿದ್ದರು.

ಮೊನ್ನೆಯ ಘಟನೆಯನ್ನೇ ತೆಗೆದುಕೊಂಡರೆ, ಬಸ್‍ನೊಳಗೆ ಅತ್ಯಾಚಾರ ನಡೆಸಿದ ನಂತರ ಆಕೆಯ ಮೇಲೆ ಕಬ್ಬಿಣದ ರಾಡ್ ಉಪಯೋಗಿಸಿ ಅಪರಾಧಿಗಳು ನಡೆಸಿದ ವಿಕೃತಿಯ ಕೆಲಸ ಇದೆಯಲ್ಲಾ ಅದು, ನಾವು ಎಂತಹ ದೇಶದಲ್ಲಿ ಇವತ್ತು ಬದುಕುತ್ತಿದ್ದೇವೆ ಎಂದು ನಮ್ಮ ಮೇಲೆ ನಮಗೆಯೇ ನಾಚಿಕೆ, ತಿರಸ್ಕಾರ ಹುಟ್ಟಿಸುವಂತಹದ್ದು. ಅಷ್ಟೇ ಅಮಾನವೀಯವಾದದ್ದು ಘಂಟೆಗಳ ಕಾಲ ಆಕೆ ರಸ್ತೆಯ ಮೇಲೆ ಅರೆಪ್ರಜ್ನಾವಸ್ಥೆಯಲ್ಲಿ ಬಿದ್ದಿದ್ದರೂ ಯಾರು care ಮಾಡದೇ, ಕಡೇಪಕ್ಷ ಆಕೆಯ ಮೇಲೊಂದು ಬಟ್ಟೆಯನ್ನೂ ಹೊದಿಸುವಷ್ಟು ಮನುಷ್ಯತ್ವ ತೋರದಿದ್ದುದು. ಹಾಗಾದರೆ ನಮಗಾರಿಗೂ ಅಮ್ಮ, ಮಗಳು, ಅತ್ತಿಗೆ, ಅಕ್ಕ, ತಂಗಿ, ಗೆಳತಿಯರೇ ಇಲ್ಲವಾ? ನಮ್ಮದು ಮುಂದುವರೆಯುತ್ತಿರುವ ದೇಶ, one of the fastest devoloping nation on the globe, ನಮ್ಮ ಜಿಡಿಪಿ ಇಷ್ಟು, ನಮ್ಮ ದೇಶದಲ್ಲಿ 27,500 ಮಿಲಿಯನೇರ್‌ಗಳಿದ್ದಾರೆಂದು ಅಭಿಮಾನ ಪಡುತ್ತೇವೆ. Vision 2020, 2030ರಲ್ಲಿ ನಾವು ಪ್ರಪಂಚದ super powerಗಳಲ್ಲಿ ಒಬ್ಬರಾಗುತ್ತೇವೆಂದು ಕನಸು ಕಾಣುತ್ತೇವೆ. ಬೆಂಕಿ ಬೀಳಬೇಕು ನಮ್ಮ ಕನಸುಗಳಿಗೆ. ಒಬ್ಬಳು ಹೆಣ್ಣುಮಗಳು ಅಂತಹ ಸ್ಥಿತಿಯಲ್ಲಿರುವಾಗ ಕನಿಷ್ಟ ಕರುಣೆಯನ್ನೂ ತೋರಿಸದ ನಾವು ಯಾವ ಸೌಭಾಗ್ಯಕ್ಕೆ ಇದನ್ನೆಲ್ಲಾ ಸಾಧಿಸಬೇಕು? Shame on ourselves! ಇದೇ ಘಟನೆ ಮೂವತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದರೆ ಜನ ಇಷ್ಟೊಂದು insensitive ಆಗಿ ನಡೆದುಕೊಳ್ಳುತ್ತಿರಲಿಲ್ಲ. ಅಭಿವೃದ್ಧಿಯ ಭ್ರಮೆಯಲ್ಲಿ ನಾವು selfish, self-centredಮತ್ತು self-obsessed ಆಗಿ ಬದುಕುತ್ತಿದ್ದೇವಾ? ಅಥವಾ ಮಹಾನಗರಗಳ survival of the fittest ಜೀವನ ಶೈಲಿ ನಮ್ಮೊಳಗಿನ ಮನುಷ್ಯನನ್ನು ಕೊಂದು ಪ್ರಾಣಿಗಳನ್ನಾಗಿ ಮಾಡುತ್ತಿದೆಯಾ?

ಸುಮ್ಮನೇ ಯೋಚಿಸಿ ನೋಡಿ. ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ intestine ಹೊರತೆಗೆಯಲಾಗಿದೆ. ಆಕೆಯ ಮೇಲೆ ನಡೆದ ಆಘಾತದಿಂದಾಗಿ ಆ ಹೆಣ್ಣುಮಗಳು ಯಾವತ್ತಿಗೂ ತಾಯ್ತನವನ್ನು ಅನುಭವಿಸಲಾರಳು. ಜೀವನಪೂರ್ತಿ ಆಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನರಕಯಾತನೆ ಅನುಭವಿಸುತ್ತಿರುತ್ತಾಳೆ. ಅದಕ್ಕೆ ಪ್ರತಿಯಾಗಿ ಆ ಅಪರಾಧಿಗಳಿಗೆ ಸಿಗುವುದೇನು? ಹೆಚ್ಚೆಂದರೆ ಮರಣದಂಡನೆ ಅಷ್ಟೇ. ಕೆಲವು ದಿನಗಳನ್ನು ಅವರು ಜೈಲಿನಲ್ಲಿ ಕಳೆಯುತ್ತಾರೆ. ಅವರ ಕೊನೆಯ ಆಸೆ ಕೇಳಲಾಗುತ್ತದೆ. ಖುಷ್ಕಾ, ಕಬಾಬ್ ತಿಂದು ಅವರು ನೇಣುಗಂಭ ಹತ್ತುತ್ತಾರೆ. ಯಾವುದೇ ನೋವು ಅನುಭವಕ್ಕೆ ಬರುವ ಮುಂಚೆಯೇ ಪ್ರಾಣ ಹೊರಟು ಹೋಗಿರುತ್ತದೆ. Hang till death! ನಿಜಕ್ಕೂ ಇಂತಹ ಸುಖದ ಸಾವನ್ನು ಅವರೆಲ್ಲಾ deserve ಮಾಡುತ್ತಾರಾ? ಆಕೆ ಅನುಭವಿಸಿದ ನೋವಿಗೆ ಈ ಶಿಕ್ಷೆ proportionate ಅನ್ನಿಸುತ್ತಿದೆಯಾ? ಇಲ್ಲವಾದರೆ ಸರ್ಕಾರವೇ ಮುಂದೆ ನಿಂತು gateway of India ಎದುರು ಆ ಅತ್ಯಾಚಾರಿಗಳನ್ನೆಲ್ಲಾ ಬೆತ್ತಲೆಗೊಳಿಸಿ, ಕ್ರೇನ್‍ಗೆ ಕಟ್ಟಿ ತಲೆ ಕೆಳಗೆ ಮಾಡಿ ನೇತು ಹಾಕಿಸಲಿ. ಲಕ್ಷಾಂತರ ಜನ ಸೇರುತ್ತಾರೆ. ಸಾರ್ವಜನಿಕವಾಗಿ ಆ ಅಪರಾಧಿಗಳೆಲ್ಲರ ನರ ಕತ್ತರಿಸಲಿ. ಸೇರಿರುವ ಪ್ರತಿಯೊಬ್ಬರಿಗೂ atleast ಒಂದೊಂದು ಕಲ್ಲನ್ನಾದರೂ ಹೊಡೆಯುವ ಅವಕಾಶ ಕೊಡಲಿ. ಆಕೆ ಅನುಭವಿಸುತ್ತಿರುವ ನೋವಿಗಿಂತ ಹತ್ತು ಪಟ್ಟು ಚಿತ್ರಹಿಂಸೆ ನೀಡಲಿ. ಮತ್ತು ಇದನ್ನೆಲ್ಲಾ ದೂರದರ್ಶನ್‍ನಲ್ಲಿ live telecast ಮಾಡಲಿ. ಇಡೀ ದೇಶ ನೋಡಬೇಕು. ನಾಳೆ ಈ ದೇಶದ ಯಾವ ಗಂಡಸಾದರೂ ಹೆಣ್ಣುಮಗಳೊಬ್ಬಳ ಮೈಮುಟ್ಟುವ ಮುನ್ನ ಸಾವಿರ ಸಲ ಯೋಚನೆ ಮಾಡಬೇಕು, ಹಾಗೆ ಮಾಡಲಿ. ವಿಕೃತಿಯನ್ನು ವಿಕೃತಿಯಿಂದ ಉತ್ತರಿಸದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಬೇಕಿದ್ದರೆ ನಮ್ಮ so called ಬುದ್ಧಿಜೀವಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಏನಾದರೂ ಬಾಯಿ ಹರಿದುಕೊಳ್ಳಲಿ. ಪಶ್ಚಿಮದ ದೇಶಗಳು ನಮ್ಮನ್ನು ಹಿಂದುಳಿದ ದೇಶ, fundamentalist, fascist nation, ಕೇಸರೀಕರಣಗೊಂಡಿರುವ ದೇಶ ಅಂತೆಲ್ಲಾ ಕರೆಯಬಹುದು. ಕರೆಯಲಿ ಬಿಡಿ. ಆದರೆ ಭಾರತವನ್ನು ಯಾರೂ ಕೂಡಾ ರೇಪಿಸ್ಟ್‍ಗಳ ದೇಶ, ವಿಕೃತಕಾಮಿಗಳ, ಕಾಮಾಂಧರ ದೇಶ ಅಒತೆಲ್ಲಾ ಕರೆಯಬಾರದು ಅಲ್ಲವೇ?