Thursday, 16 August 2012

ONE LINERS..................... U/A



೧. THANK GOD!  ನಾನು ನಾಸ್ತಿಕ!
 (ಭಾರತದ ಪ್ರಸಿದ್ಧ ಯಾತ್ರಾಸ್ಥಳವೊಂದರಲ್ಲಿ ನೂರಾರು ಭಕ್ತರು ಕಾಲ್ತುಳಿತದಲ್ಲಿ ಸತ್ತಿದ್ದನ್ನು ಟಿವಿಯಲ್ಲಿ ನೋಡಿದಾಗ ಅನ್ನಿಸಿದ್ದು)

೨. ನಿಮ್ಮನ್ನು ನಂಬಿದ ಹುಡುಗಿಯನ್ನು ಜೀವನದಲ್ಲಿ ಕೈಬಿಟ್ಟರೂ ಪರವಾಗಿಲ್ಲ, ಆದರೆ ಥಿಯೇಟರ್‌ನಲ್ಲಿ ಕೈಬಿಡಬೇಡಿ!

೩. ನೀವು ನಿಜವಾದ ಪ್ರೇಮಿಯಾಗಿದ್ದರೆ ನಾಳೆ ನಿಮ್ಮ ಮಗಳಿಗೆ ಹಳೇ ಗರ್ಲ್‍ಫ್ರೆಂಡ್ ಹೆಸರನ್ನು ಇಡುತ್ತೀರಿ. ಆದರೆ ನಿಜವಾದ ಪ್ರೇಮಿಗಳ problem ಏನಪ್ಪಾ ಅಂದ್ರೆ ಎಲ್ಲಾ ಹತ್ತು ಹೆಸರುಗಳೂ ಚೆನ್ನಾಗಿರುತ್ತವೆ.

೪. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ವ್ಯತ್ಯಾಸ: ನಿಮ್ ಹೆಂಡ್ತಿ ನಿಮ್ ಫ್ರೆಂಡ್ ಜೊತೆ ಮಾತಾಡಿದ್ರೆ ಅದು ಸ್ವಾತಂತ್ರ್ಯ, ನಿಮ್ ಹೆಂಡ್ತಿ ನಿಮ್ ಫ್ರೆಂಡ್ ಜೊತೆ ಓಡೋದ್ರೆ ಅದು ಸ್ವೇಚ್ಛೆ!

೫. ನೀವು ಕಾರ್ ಡ್ರೈವ್ ಮಾಡುವಾಗ ಒಮ್ಮೊಮ್ಮೆ ಗೇರ್ ಬಾಕ್ಸ್ ಕೈಕೊಟ್ಟು ಗೇರ್ ಚೇಂಜ್ ಆಗದೇ ಇರಬಹುದು. ಅಂತಹ ಸಮಯದಲ್ಲಿ ಗಾಡಿಯನ್ನು ಸೀದಾ third ಗೇರ್‌ಗೆ ಹಾಕಿ, ಗೇರ್ ಚೇಂಜ್ ಆಗದಿದ್ದರೆ ಸೆಕೆಂಡ್ ಗೇರ್‌ಗೆ ಹಾಕಿ, ಮತ್ತೆ ಗೇರ್ ಚೇಂಜ್ ಆಗದಿದ್ದರೆ ನಿಧಾನವಾಗಿ ರಿವರ್ಸ್ ಗೇರ್‌ಗೆ ಹಾಕಿಕೊಳ್ಳಿ, ಆಗಲೂ ಗೇರ್ ಚೇಂಜ್ ಆಗದಿದ್ದರೆ ಮೊದ್ಲು ನಿಮ್ zip ಹಾಕ್ಕೊಳ್ಳಿ!

೬. ಪುರುಷರ ದೇಹದ ಭಾಗಗಳು ನೀಲಿಗಟ್ಟುವುದು ಗ್ಯಾಂಗ್ರೀನ್ ಖಾಯಿಲೆಯ ಲಕ್ಷಣ. ನಿಮ್ಮ ದೇಹದ ಯಾವುದೇ ಭಾಗ ನೀಲಿಯಾಗಿದ್ದರೆ, ಮೊದಲು ಶಸ್ತ್ರಚಿಕಿತ್ಸೆಯ ಮೂಲಕ ಆ ಭಾಗವನ್ನು ಕತ್ತರಿಸಿಕೊಳ್ಳಿ. ಆದರೆ ಅದಕ್ಕಿಂತ ಮೊದಲು ನಿಮ್ಮ ಅಂಡರ್‌ವೇರ್ ಬಣ್ಣ ಬಿಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ!    

೭. ಧೃತರಾಷ್ಟ್ರನಿಗೆ ಒಬ್ಬಳು ಹೆಂಡತಿಯಿಂದ ಬರೋಬ್ಬರಿ ನೂರಾ ಒಂದು ಮಕ್ಕಳಿದ್ದರು. DHRITHARASHTRA: Its just not oil.. its liquid engineering!!

೮. ಶ್ರೀಮತಿ ಇಂದಿರಾ ಗಾಂಧಿ ಎಂತಹ ಮಹಿಳಾವಾದಿಯಾಗಿದ್ದರು ಎಂದರೆ 1967ರ ಅವರ ಮೊದಲ ಮಂತ್ರಿಮಂಡಲದಲ್ಲಿ ಕೇವಲ ಒಬ್ಬರೇ ಗಂಡಸು ಇದ್ದಿದ್ದು ಮತ್ತು ಅವರ ಹೆಸರು ಶ್ರೀಮತಿ ಇಂದಿರಾ ಗಾಂಧಿ!

೯. ನಿಮ್ಮ ಬಳಿ ಎಂತಹ ಪೆನ್ ಇದ್ದರೂ ದಿನಕ್ಕೆ ಎರಡು ಸಲ ಮಾತ್ರ ಬರೆಯಿರಿ, ಸರಾಗವಾಗಿ ಬರಯುತ್ತೆ, ದಿನಕ್ಕೆ ನಾಲ್ಕು ಸಲ ಬರದರೆ ಇಂಕ್ ಚೆಲ್ಲುತ್ತೆ, ದಿನಕ್ಕೆ ಆರು ಸಲ ಬರೆದರೆ ಪೆನ್ ಸವೆದು ಹೋಗುತ್ತೆ ಮತ್ತು ದಿನಕ್ಕೆ ಎಂಟು ಸಲ ಬರೆದರೆ......... ಸುಸ್ತಾಗುತ್ತೆ!

೧೦. ವಿಧಾನಸೌಧದಲ್ಲಿ ಹಾಲಪ್ಪನವರ cabin ಒಳಗೆ ಹೋಗುವಾಗ door knock ಮಾಡಿ ನಂತರ ಒಳ ಹೋಗಿ. ಅವರು ಮಂತ್ರಿ ಸ್ಥಾನ ಕಳೆದುಕೊಂಡಿರಬಹುದು, ಆದರೆ ಈಗಲೂ ಅವರಿಗೆ ’ಕೈ’ತುಂಬಾ ಕೆಲಸ ಇರುತ್ತೆ!

೧೧. ಮಹಾಭಾರತವನ್ನು ಓದಿದ ನಂತರ ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ, ವಸುದೇವ ದೇವಕಿಯರ ಏಳನೆಯ ಮಗುವಿನಿಂದ ಸಾವು ಬರುತ್ತೆ ಅಂತ ಕಂಸನಿಗೆ ಮೊದಲೇ ಗೊತ್ತಿದ್ದರೂ ಅವರಿಬ್ಬರನ್ನೂ ಒಂದೇ ಸೆಲ್‌ನಲ್ಲಿ ಯಾಕೆ ಇಟ್ಟಿದ್ದ? ಹೀಗೂ ಉಂಟೇ?!

೧೨. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ದಯವಿಟ್ಟು ಅವರಿಗೆ propose ಮಾಡ್ಬೇಡಿ. ಅವರು ಒಪ್ಪದಿದ್ದರೆ ಪ್ರೀತಿ ಸತ್ತುಹೋಗುತ್ತೆ; ಅವರು ಒಪ್ಪಿದರೆ? ಆಗಲೂ ಪ್ರೀತಿ ಸತ್ತು ಹೋಗುತ್ತೆ!


೧೩. ಇವತ್ತು ಡಾಕ್ಟರ್ injection ಕೊಟ್ಟಾಗಲೇ ಗೊತ್ತಗಿದ್ದು, ಮೊನ್ನೆ ರಾತ್ರಿ ಕುಡಿದಿದ್ದಾಗ ಕೆನ್ನೆ ಕಚ್ಚಿದ್ದು ಗರ್ಲ್‍ಫ್ರೆಂಡ್ ಅಲ್ಲ ಅಂತಾ!

೧೪. ಅಪ್ಪನ ಹಳೇ ರೇಡಿಯೊ ಮಾರಿ ಹೊಸ ಟೀವಿ ಕೊಳ್ಳುವ ನಾವೆಲ್ಲರೂ democratic ದೇಶದಲ್ಲಿ ಹುಟ್ಟಿ, marxist ಸಾಹಿತ್ಯ ಓದಿ, socialist ಭಾಷಣ ಕೇಳಿ, Capitalism ಅನ್ನು ತೀವ್ರವಾಗಿ ವಿರೋಧಿಸುವ CAPITALIST ವ್ಯಕ್ತಿಗಳು!

೧೫. ಕುವೆಂಪು ಅವರು ಬರೆದ ಶ್ರೇಷ್ಠ ಪುಸ್ತಕ ಯಾವುದು? ಶ್ರೀ ರಾಮಾಯಣ ದರ್ಶನಂ ಅಲ್ಲ, ರಕ್ತಾಕ್ಷಿ ಅಲ್ಲ, ಮಲೆಗಳಲ್ಲಿ ಮದುಮಗಳು ಅಲ್ಲ. ಆ ಪುಸ್ತಕದ ಹೆಸರು ’ಶ್ರೀ ಚಾರುಚಂದ್ರಚಕೋರ ಪೂರ್ಣಚಂದ್ರ ತೇಜಸ್ವಿ’.

೧೬. ಕಾಂಗ್ರೆಸ್ ಸೇರಬೇಡಿ ಅಲ್ಲಿ ಬರೀ ಭ್ರಷ್ಟಾಚಾರಿಗಳಿದ್ದಾರೆ, ಜೆಡಿ(ಎಸ್) ಸೇರಬೇಡಿ ಅಲ್ಲಿ ಬರೀ ಜಾತಿವಾದಿಗಳಿದ್ದಾರೆ, ಬಿಎಸ್‌ಆರ್ ಕಾಂಗ್ರೆಸ್ ಸೇರಬೇಡಿ ಅಲ್ಲಿ ಬರೀ ಕ್ರಿಮಿನಲ್‌ಗಳಿದ್ದಾರೆ, ಬಿಜೆಪಿಗೆ ಬನ್ನಿ ಇಲ್ಲಿ ಎಲ್ಲರೂ ಇದ್ದಾರೆ!

೧೭. ಕಣ್ಣೆದುರಿಗೇ ಚಿಕನ್ ಬಿರಿಯಾನಿ ಇದ್ದರೂ ಅದನ್ನು ಯಾರಿಗೂ ಮುಟ್ಟಲು ಬಿಡದೆ, ತಾನೂ ಇಡ್ಲಿ ತಿಂದು ಬೇರೆಯವರಿಗೂ ಇಡ್ಲಿ ತಿನ್ನಿಸುವವನನ್ನು ’ಬುದ್ಧಿಜೀವಿ’ ಅನ್ನಬಹುದು. ಉದಾಹರಣೆ: ಯು.ಆರ್. ಅನಂತಮೂರ್ತಿ.

10/08/2012


       

5 comments:

Sushritha said...

nice.. :)

SAVI RAJ said...

thnk u:)

Unknown said...

Ultimate :)

Anonymous said...

Avakaashavaadi :
Mr. SaviRaj,
Pl Write an article/ ur opinion on Mr. Modi.
This way u can get more visitors, make more enemies/friends to this blog, have longer comment menu to house those comments and let 'em fight it out on ur blog.
and in the meantime at least few of the readers/literature enthusiasts from this Modi basher/fan club can get a chance at reading other wonderful/actually worth reading articles that u have published/will publish.
Just a suggestion

SAVI RAJ said...

thanks fa yo suggestion.. but d problem s 'm neither an admirer nor a critic of Modi.. how can i make comments on chief minister of another state whose administration doesnt ve any direct or indirect impact on t society around me? jus on t basis f media reports(u know media s divided 2day on pro-modi n anti-modi ideologies) n fake statistics on social networking sites, i think its foolishness to admire or criticise a political leader!